ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Friday, 10 January 2014

ಬಡವಿಯೊಡಲುರಿ ...........


ನನ್ನ ಅಚ್ಚು ಮೆಚ್ಚಿನ ಲೇಖಕರಲ್ಲಿ ಒಬ್ಬರಾದ ಹಾ ಮಾ ನಾಯಕ್ ಅವರ ಸಂಗತಿ ಎನ್ನುವ ಪ್ರಬಂಧ ಸಂಕಲನದಲ್ಲಿ  ‘ಮಹಾಕಾವ್ಯ ಜೀವನಎನ್ನುವ ಒಂದು ಸಂಗತಿಯು ನನ್ನನ್ನು ಬಹಳವಾಗಿ ಕಾಡಿತು….. ಇದರಲ್ಲಿ ಉತ್ತರ ಕರ್ನಾಟಕದ ಬಡ ಜನರ ಬವಣೆಯ ಬದುಕಿನ ಇನ್ನೊಂದು ಚಿತ್ರಣ ಅನಾವರಣಗೊಳ್ಳುತ್ತದೆ……. ಅದನ್ನು ಓದಿದ ಮೇಲೆ ಕಣ್ಣಂಚಲ್ಲಿ ಒಂದು ಹನಿ ಕಣ್ಣೀರ ಜಿನುಗಿದಂತೆ ಭಾವ…….
ಈ ಒಂದು ಪ್ರಬಂಧ ಹತ್ತಾರು ಜನರನ್ನು ತಲುಪಲಿ ಎನ್ನುವ ಆಶಯದಿಂದ ಇಲ್ಲಿ ಪ್ರಕಟಿಸುತ್ತಿದ್ದೇನೆಇದರ ಮೂಲಕ ಲೇಖಕರಿಗೆ ಮತ್ತು  ಪ್ರಕಾಶಕರಿಗೆ ಪ್ರೀತಿಯಿಂದ ಧನ್ಯವಾದ ತಿಳಿಸುತ್ತೇನೆ…… 

ಅವರ ಪ್ರಬಂಧ ನೋಡಿ ಕಲ್ಪನೆ ಮಾಡಿ ಬರೆದ  ಕವನ ಇದು....

ಬಡವಿಯೊಡಲುರಿ ...........

ಬೆಳಗಾಗೆದ್ದು ಉಟ್ಟುಡುಗೆಯಲೇ
ಬೆಟ್ಟ ಗುಡ್ಡಗಳ ಕಡೆಗೆ ನಡೆದು
ದೂರದ ಬಯಲು ದಾರಿಯಲಿ ಸಾಗಿ
ಹತ್ತು ಹಲವೆಡೆ ಸುತ್ತಿ ಅಲೆದು

ಸಿಕ್ಕ ಉರುವಲುಗಳ ಒಟ್ಟುಗೂಡಿಸಿ
ಇದ್ದ ದಾರವ ಹಗ್ಗವಾಗಿಸಿ ಬಿಗಿದು
ಕಟ್ಟನದನು ಶಿರದ ಮೇಲಕೇರಿಸಿ
ಮನದ ಭಾರದ ಮುಂದೆ ಹೆಗಲ
ಭಾರವ ಮರೆತು ನಡೆಯುತ ಸಾಗುತಿರಲು

ಬೀಸಿತೊಂದು ಗಾಳಿ, ಮಿಂಚಿತೊಂದು ಮಿಂಚು,
ಬಡಿಯಿತೊಂದು ಸಿಡಿಲು, ಭೋರ್ಗರೆಯಿತು ಮಳೆ
ವರ್ಷಧಾರೆಯ ನಡುವೆ ಸಿಲುಕಿ ನಡುಗಿ ನಡೆಯುತಾ
ಗಮ್ಯ ತಲುಪುವ ಹೊತ್ತಿಗೆ ಕತ್ತಲಾಯಿತು

ಹೊತ್ತು ತಂದ ಹೊರೆಯ ಇಳಿಸಿ ಕಟ್ಟಿದ್ದ ದಾರವ
ಬಿಚ್ಚಿ ನೋಡಲು ಕಟ್ಟಿಗೆಯೆಲ್ಲವು ನೆನೆದು
ಹಸಿಯಾಗಿಹುದ ಕಂಡೊಡನೆ ತೊಯ್ದ ಮಳೆ
ಹನಿಯ ಜೊತೆಗೂಡಿತು ಕಣ್ಣಂಚಿನ ಕಣ್ಣೀರು

ಬವಣೆ ಪಟ್ಟು ಒಟ್ಟುಗೂಡಿಸಿ ಕಟ್ಟಿ ತಂದ
ಕಟ್ಟಿಗೆಯಲಿ ಹೊತ್ತಿನ ಕೂಳಿನ ತುತ್ತನು
ಅಟ್ಟು ಉಣ್ಣಲಾಗದಂತೆ ಮಾಡಿದ ಕಟುಕ
ವಿಧಿಯ ಕುಹಕ ಬುದ್ಧಿಗೆ ಹಿಡಿ ಶಾಪವಿರಲಿ ......

2 comments:

  1. ಸಂಗತಿ ನಾವೆಲ್ಲ ಓದಲೇ ಬೇಕು. ಹ.ಮಾ. ನಾಯಕರು ಸಮಗ್ರ ಸಂಪನ್ನ ಸಾರಸ್ವತ.

    ತಮ್ಮ ಕವನವು ನನ್ನ ಹಳ್ಳಿಗಾಡ ಬವಣೆ ಚಿತ್ರಿಸಿತು, ಖೇದವಾಯಿತು.

    ReplyDelete
  2. ತುಂಬು ಮನದ ಧನ್ಯವಾದಗಳು ಸರ್

    ReplyDelete